ನಂದಿ
ಎಂದಾಕ್ಷಣ ಬೆಂಗಳೂರಿನ ಸಮೀಪ
ಇರುವ ನಂದಿ ಬೆಟ್ಟ,
ಅಲ್ಲಿನ
ತಂಪು ವಾತಾವರಣ,
ಟಿಪ್ಪೂ
ಡ್ರಾಪ್ ಹಾಗೂ ಸ್ವಾತಂತ್ರ
ಪೂರ್ವದಲ್ಲಿ ಮಹಾತ್ಮಗಾಂಧಿ
ತಂಗಿದ್ದ ಅತಿಥಿಗೃಹ ಕಣ್ಮುಂದೆ
ಸುಳಿಯುತ್ತವೆ..
ಇದೇ
ನಂದಿಯ ಈಶಾನ್ಯ ದಿಕ್ಕಿನಲ್ಲಿ
'ನಂದಿಗ್ರಾಮ'
ಎನ್ನುವ
ಹಳ್ಳಿ ಇದೆ.
ಇಲ್ಲಿ
ಭೋಗನಂದೀಶ್ವರ,
ಅರುಣಾಚಲೇಶ್ವರ
ಎಂಬ ೮ನೇ ಶತಮಾನಕ್ಕೆ ಸೇರಿದ ತುಂಬ
ಸುಂದರ ಕಲಾತ್ಮಕ ಕೆತ್ತನೆಗಳಿಂದ
ಕೂಡಿರುವ ಅವಳಿ ದೇವಸ್ಥಾನಗಳಿವೆ.
ಪ್ರವೇಶ
ಪ್ರವೇಶ
ದ್ವಾರದಿಂದ ಒಳ ಹೋಗುತ್ತಲೇ
ವಿಶಾಲವಾದ ಸುಮಾರು ೩೦೦ಮೀ ಉದ್ದವಿರುವ
ರಥಬೀದಿ ಸಿಗುತ್ತದೆ.
ಇದರ
ಇಕ್ಕೆಲಗಳಲ್ಲಿ ಭಕ್ತಾದಿಗಳಿಗೆ
ತಂಗಲು ನಿರ್ಮಿಸಿದ್ದ ಕೈಸಾಲೆಗಳು,
ಅದರ
ನಂತರ ನಂದೀಶ್ವರ ಮತ್ತು ಅರುಣಾಚಲೇಶ್ವರ
ದೇವಾಲಯಗಳ ಸಮುಚ್ಚಯದ ಗೋಪುರ
ಸಹಿತ ಪ್ರವೇಶದ್ವಾರ ಎದುರಾಗುತ್ತದೆ.
ಈ
ಮೂಲಕ ಒಳಪ್ರವೇಶಿಸುತ್ತಿದ್ದಂತೆ
ಒಮ್ಮೆಲೇ ಮನಸೂರೆಗೊಳ್ಳುವ ಕಲಾತ್ಮಕ
ಕೆತ್ತನೆ ಗಳಿಂದೊಡಗೂಡಿದ ನಂದಿ
ಮಂಟಪ,
ನವರಂಗ,
ಸುಕನಾಸಿ
ಹಾಗೂ ದೇವರ ಗರ್ಭಗೃಹಗಳು
ಇದಿರಾಗುತ್ತವೆ.
ಭೋಗನಂದೀಶ್ವರನ
ಗರ್ಭಗೃಹ ಬಾಗಿಲ ಮೇಲಿರುವ
ಚಿತ್ರಪಟ್ಟಿಕೆಗಳಂತೂ ಶಿಲ್ಪ
ಕಲಾ ವೈಭವವನ್ನೇ ಸಾರುತ್ತವೆ.
ಅದರಲ್ಲಿ
ಬಿಡಿಸಿರುವ ಲತಾಗುಚ್ಛ,
ಗಿಣಿ-ಪಕ್ಷಿಗಳು
ಹೂ-ಬಳ್ಳಿಗಳು
ನೋಡುಗರನ್ನು ಮಂತ್ರ ಮುಗ್ಧವಾಗಿಸುತ್ತವೆ.
ಗರ್ಭಗೃಹದ
ಮುಂದಿರುವ ನವರಂಗದ ನಾಲ್ಕೂ
ಮೂಲೆಗಿರುವ ಕಲ್ಲಿನ ಕಂಬಗಳ ಕುಸುರಿ
ಕೆಲಸವಂತೂ ಮನಸೆಳೆಯುವಂತಿದೆ.
(ಈ
ಕಂಬಗಳಿಗೆ ಸಂಬಂಧಿಸಿದಂತೆ
ಐತಿಹಾಸಿಕ ಘಟನೆಯೊಂದಿದೆ).
ಇತಿಹಾಸ
ಸ್ವಲ್ಪವಾದರೂ
ಐತಿಹಾಸಿಕ ಪ್ರಜ್ಞೆ ಇರುವವರಿಗೆ
ಈ ದೇವಾಲಯಗಳ ಸಮುಚ್ಚಯವನ್ನು
ನೋಡಿದಾಕ್ಷಣ ಮನಸ್ಸನಲ್ಲಿ
ಪ್ರಶ್ನೆಯೊಂದು ಮೂಡುತ್ತದೆ.
ಕ್ರಿ.ಶ.806ನೇ
ಇಸ್ವಿಯ ರಾಷ್ಟ್ರಕೂಟರ
ತಾಮ್ರಶಾಸನವೊಂದರಲ್ಲಿ ಈ ದೇವಾಲಯದ
ಉಲ್ಲೇಖವಿದೆ.
ಅಂದರೆ
ಇದು ಅದಕ್ಕಿಂತ ಹಿಂದಿನದ್ದಾದಿರಬೇಕು.
ಅಷ್ಟು
ಹಿಂದೆ ದಕ್ಷಿಣ ಕರ್ನಾಟಕದ ಈ
ಭಾಗದಲ್ಲಿ ದ್ರಾವಿಡ ಶ್ಯೆಲಿಯ
ಇಂಥ ಅದ್ಭುತ ದೇವಾಲಯ ಇರುವುದು
ಒಂದು ಅಚ್ಚರಿಯ ವಿಷಯವೇ ಸರಿ.
ಇದಕ್ಕೆ
ಆಗಿನ ಕಾಲದಲ್ಲಾದ ರಾಜಕೀಯ ವಿಪ್ಲವಗಳ
ಕಾರಣವೊಂದಿದೆ.
ಕ್ರಿ.ಶ.810ರಲ್ಲಿ
ದೊರೆತ ತಾಮ್ರಶಾಸನದಿಂದ ಈ ದೇವಾಲಯ
ಸಂಕೀರ್ಣವನ್ನು ಆಗಿನ ಬಾಣ ವಂಶದ
ರಾಜ ಬಾಣ ವಿದ್ಯಾಧರನ ರಾಣಿ ರತ್ನಾವಳಿ
ಎಂಬುವವಳು ಕಟ್ಟಿಸಿದಳೆಂದು
ತಿಳಿದು ಬರುತ್ತದೆ.
ಇತಿಹಾಸದ
ಆಗಿನ ಕಾಲಘಟ್ಟದಲ್ಲಿ ಬಾದಾಮಿ
ಚಾಲುಕ್ಯರು ಸಾರ್ವಭೌಮತ್ವವನ್ನು
ಹೊಂದಿದ್ದರೆಂಬುದು ಎಲ್ಲರಗೂ
ತಿಳಿದದ್ದೇ.
ಇವರು
ದಕ್ಷಿಣದವರೆಗೆ ದಂಡೆತ್ತಿ ಬಂದು
ಪಲ್ಲವರನ್ನು ಸೋಲಿಸಿದರು.
ಅಲ್ಲಿಂದ
ಹಿಂತಿರುಗುವಾಗ ಅಲ್ಲಿನ ಶಿಲ್ಪಿಗಳನ್ನು
ಜತೆಗೇ ಕರೆದೊಯ್ದುರು.
ಹೀಗೆ
ಕರೆತಂದ ಶಿಲ್ಪಿಗಳಿಂದ ಪಟ್ಟದಕಲ್ಲಿನಲ್ಲಿ
ಶಿಲ್ಪಕಲಾ ಸಮುಚ್ಚಯವೊಂದನ್ನು
ಸೃಷ್ಟಿಸಿರುವುದನ್ನು ಇಂದಿಗೂ
ಕಾಣಬಹುದು.
ಕಾಲಾನುಕ್ರಮದಲ್ಲಿ
ಜರುಗಿದ ರಾಜಕೀಯ ಚದುರಂಗದಾಟದಲ್ಲಿ
ಚಾಲುಕ್ಯರನ್ನು ಸೋಲಿಸಿದ
ರಾಷ್ಟ್ರಕೂಟರ ಕೈ ಮೇಲಾಯಿತು.
ಈ
ಕಾಲಘಟ್ಟದಲ್ಲಿ ತಮಿಳುನಾಡಿನಿಂದ
ಬಂದಿದ್ದ ಶಿಲ್ಪಿಗಳು ಬದಲಾದ
ರಾಜಕೀಯ ಸ್ಥಿತ್ಯಂತರದಿಂದ
ಆಶ್ರಯವಿಲ್ಲದಂತಾಗಿ ಮತ್ತೆ
ತಿರುಗಿ ತಮಿಳುನಾಡಿಗೆ ಗುಳೆ
ಹೊರಟರು.
ಹೀಗೆ
ಬರುವಾಗ ದಾರಿಮಧ್ಯೆ ಸಿಗುವ ಕೋಲಾರ
ಪ್ರಾಂತದಲ್ಲಿ ಆ ಗ ಆಳುತ್ತಿದ್ದ
ಬಾಣದೊರೆಗಳು ಇವರಿಗೆ ಆಶ್ರಯ
ನೀಡಿ ನಂದಿಯಲ್ಲಿ ಈ ಅನುಪಮವಾದ
ಅರುಣಾಚಲೇಶ್ವರ-ಭೋಗನಂದೀಶ್ವರ
ದೇವಾಲಯಗಳನ್ನು ಕಟ್ಟಿಸಿದರೆಂದು
ಇತಿಹಾಸ ಹೇಳುತ್ತದೆ.
ತದನಂತರ
ಬಾಣರನ್ನು ಸೋಲಿಸಿ ನೊಳಂಬರು
ಪ್ರವರ್ಧಮಾನಕ್ಕೆ ಬಂದರು.
ಅತ್ತ
ತಮಿಳುನಾಡಿನಲ್ಲೂ ಚೋಳರ ಕೈ ಮೇಲಾಗಿ
ರಾಜರಾಜ ಚೋಳ ಸಾಮ್ರಾಜ್ಯ ವಿಸ್ತರಣೆಯ
ಉತ್ಸಾಹದಲ್ಲಿ ನೊಳಂಬರ ಮೇಲೆ
ಆಕ್ರಮಣ ಮಾಡಿದ.
ಆಗ
ನಂದಿಯಲ್ಲಿರುವ ನಂದೀಶ್ವರ ಮತ್ತು
ಅರುಣಾಚಲೇಶ್ವರ ದೇವಾಲಯದ
ನವರಂಗದಲ್ಲಿದ್ದ ನಾಲ್ಕು ಕಲಾತ್ಮಕ
ಕೆತ್ತನೆ ಕಂಬಗಳು ಅವನನ್ನು
ಬಹುವಾಗಿ ಆಕರ್ಷಿಸಿದವು.
ಅದೇ
ಸಮಯದಲ್ಲಿ ತಿರುವಾರೂರಿನಲ್ಲಿ
ತಾನು ನಿರ್ಮಿಸುತ್ತಿದ್ದ
ದೇವಾಲಯವೊಂದಕ್ಕೆ ಆ ನಾಲ್ಕೂ
ಕಂಬಗಳನ್ನು ಸಾಗಿಸಿದ.
ಹೀಗೆ
ಮಾಡಿದ ರಾಜರಾಜ ಚೋಳನಿಗೆ ಪಾಪಭೀತಿ
ಶುರುವಾಗುತ್ತದೆ.
ಆತ್ಮಸಾಕ್ಷಿಗೆ
ಓಗೊಟ್ಟು ಪಾಪಪ್ರಾಯಶ್ಚಿತ್ತಕ್ಕಾಗಿ
ನಂದೀಶ್ವರನ ದೇವಾಲಯದ ನವರಂಗದ
ಕಂಬವೊಂದರಲ್ಲಿ ತಾನು ಕೈಮುಗಿದು
ನಿಂತಿರುವ ಭಂಗಿಯ ಶಿಲ್ಪವೊಂದನ್ನು
ನಿಲ್ಲಿಸಿ ಪಾಪ ಮುಕ್ತನಾದನೆಂದು
ಹೇಳಲಾಗುತ್ತದೆ.
ಹಾಗೆ
ಕೈ ಮುಗಿದು ನಿಂತಿರುವ ರಾಜರಾಜ
ಚೋಳನ ಮೂರ್ತಿಯನ್ನು ಇಂದಿಗೂ
ಕಾಣಬಹುದು.
ಆ
ನಂತರದ ನೂರಾರು ವರ್ಷಗಳ ಆಳ್ವಿಕೆಯಲ್ಲಿ
ಹಲವಾರು ರಾಜಮನೆತನಗಳು ಈ ದೇವಾಲಯಗಳಿಗೆ
ಅಭಿವೃದ್ಧಿ ಸೇವಾಕಾರ್ಯವನ್ನು
ಸಲ್ಲಿಸಿವೆ.
ಇದರಲ್ಲಿ
ವಿಜಯನಗರದ ಅರಸರ ಕಾಣಿಕೆ ಬಹುದೊಡ್ಡದು.
ನಂದೀಶ್ವರ
ದೇವಾಲಯದ ಪಕ್ಕದಲ್ಲಿ ರುವ ಕಲ್ಯಾಣ
ಮಂಟಪ ಹಾಗು ಪುಷ್ಕರಣಿಯ ಕಲಾಕೌಶಲ್ಯ
ಮನಮೋಹಕವಾದವು.
ಶಿಲ್ಪ
ವೈಭವ
ಭೋಗನಂದೀಶ್ವರ
ಹಾಗು ಅರುಣಾಚಲೇಶ್ವರ ಈ ಎರಡೂ
ದೇವಸ್ಥಾನಗಳು ಒಂದೇ ತರಹದ ತಳಹದಿಯ
ಮೇಲೆ ನಿರ್ಮಿಸಲಾಗಿದೆ.
ಎರಡೂದೇವಸ್ಥಾನಗಳು
ಸ್ವಲ್ಪ ಹೆಚ್ಚು ಕಡಿಮೆ ಒಂದೇ
ವಿಸ್ತಾರವುಳ್ಳವು.
ಅಲ್ಲದೇ
ನೋಡಲು ಜೋಡಿ ದೇವಸ್ಥಾನಗಳಂತೆ
ಇವೆ.
ಎರಡರಲ್ಲೂ
ಗರ್ಭಗೃಹ,ಸುಕನಾಸಿ,
ನಾಲ್ಕು
ಕಲಾತ್ಮಕ ಕಂಬಗಳಿಂದ ಕೂಡಿದ
ಸಭಾಮಂಟಪಗಳು ಇವೆ.
ಇಡೀ
ದೇವಸ್ಥಾನದ್ದೇ ಒಂದು ಸೊಬಗಾದರೆ
ಕಲಾತ್ಮಕ
ಕಂಬಗಳದ್ದು ಇದನ್ನೂ
ಮೀರಿಸುವಂಥದ್ದು.
ಚೌಕಾಕಾರದ
ಪೀಠದ ಈ ಕಂಬಗಳು ಮೇಲ್ತುದಿಯಲ್ಲಿ
ಉರುಳಿಯಾಕಾರದ ದಿಂಡು ಹೊಂದಿವೆ.
ಅದರ
ಮೇಲೆ ದಿಂಬಿನಾಕಾರದ ಬೋದಿಗೆ.
ಮೈಯೆಲ್ಲ
ಕಲಾತ್ಮಕ ಕುಸುರಿಕೆತ್ತನೆಯ
ನಯಗಾರಿಕೆ.
ಒಟ್ಟಿನಲ್ಲಿ
ನೋಡುಗನ ಮನಸ್ಸನ್ನು ಥಟ್ಟನೇ
ಸೆಳೆಯುವುದಲ್ಲದೆ ಅಚ್ಚಳಿಯದೆ
ಉಳಿದುಬಿಡುತ್ತವೆ .
ಇನ್ನು
ದೇಗುಲದ ಸುತ್ತಲಿನ ಗೋಡೆ ಯಲ್ಲಿ
ಮಹಿಷಮರ್ಧಿನಿ,ಕಿರಾತಾರ್ಜುನೀಯ,
ನಟರಾಜ,
ಶಿವ-ಪಾರ್ವತಿ,
ಗಜಸಂಹಾರ
ಹಾಗು ತ್ರಿಪುರಾಂಕ ವಿಷ್ಣುವಿನ
ಕಲಾನೈಪುಣ್ಯದ ಶಿಲ್ಪಗಳು ಒಡಮೂಡಿವೆ.
ಜಾನಪದ ಹಿನ್ನೆಲೆ
ನಮ್ಮೆಲ್ಲ
ಬಹಳಷ್ಟು ಹಳ್ಳಿಗಳಿರುವಂತೆ
ನಂದಿಗ್ರಾಮಕ್ಕೂ ಜಾನಪದ ಕಥೆಯೊಂದರ
ಹಿನ್ನೆಲೆ ಇದೆ.
ಹಿಂದೆ
ಈ ಊರ ಜಂಗಮರೊಬ್ಬರಿಗೆ ಯೋಗ-ಭೋಗ
ಎಂಬ ಇಬ್ಬರು ಮಕ್ಕಳು ಇದ್ದರಂತೆ.
ಹಿರಿಯವನೆ
ಭೋಗ. ಇವನೇ
ಮನೆಯ ಎಲ್ಲ ಜವಾಬ್ದಾರಿಯನ್ನು
ಹೊತ್ತುಕೊಂಡಿದ್ದ.
ಕಿರಿಯವ
ಯೋಗ ಮನೆಯ ದನ-ಕರುಗಳನ್ನು
ಬೆಟ್ಟಕ್ಕೆ ಕರೆದೊಯ್ದು ಮೇಯಿಸಿಕೊಂಡು
ಬರುತ್ತಿದ್ದ.
ಕಿರಿಯವನ
ಮತ್ತು ಅವನ ಹೆಂಡತಿಯ ಬೇಜವಾಬ್ದಾರಿ
ವರ್ತನೆಯನ್ನು ಕಂಡ ಹಿರಿಯವನ
ಹೆಂಡತಿಗೆ ಅಸಹನೆ ಉಂಟಾಗುತ್ತದೆ.
ಅವಳು
ಒಮ್ಮೆ ಕಿರಿಯವನು ಬೆಟ್ಟಕ್ಕೆ
ದನಗಳನ್ನು ಮೇಯಿಸಲು ಹೋದಾಗ ಬಾಡಿಗೆ
ಬಂಟರನ್ನು ಬಿಟ್ಟು
ಕೊಲ್ಲಿಸಿಬಿಡುತ್ತಾಳೆ.ದೇಹವೆರೆಡು
ಜೀವವೊಂದೇ ಎಂಬಂತಿದ್ದ ಅಣ್ಣನಿಗೆ
ಈ ವಿಷಯ ತಕ್ಷಣಕ್ಕೆ ತಿಳಿದು
ಬಿಡುತ್ತದೆ.
ಅಲ್ಲದೇ
ತಮ್ಮನನ್ನು ಕೊಲ್ಲಿಸಿದ್ದು ತನ್ನ
ಹೆಂಡತಿಯಲ್ಲದೆ ಬೇರಾರೂ ಅಲ್ಲ
ಎಂಬುದು ತಿಳಿದುಬಿಡುತ್ತದೆ.
ಇದರಂದ
ಮನನೊಂದು ಅಲ್ಲೇ ಪ್ರಾಣ ಬಿಡುತ್ತಾನೆ.
ಇದನ್ನು
ಕಂಡ ಅವನ ಹೆಂಡತಿ ದು:ಖದಿಂದ
ತಮ್ಮನ ಹೆಂಡತಿಯನ್ನು ಹುಡುಕಿಕೊಂಡು
ಹೋಗುತ್ತಾಳೆ.
ವಯಸ್ಸಿನಲ್ಲಿ
ಇನ್ನೂ ಚಿಕ್ಕವಳಾದ ಅವಳು ಹತ್ತಿರದ
ದೇವಸ್ಥಾನವೊಂದರಲ್ಲಿ ಎರಡು
ಶಿವಲಿಂಗಗಳೊಂದಿಗೆ ಆಟವಾಡುತ್ತಿರುವುದನ್ನು
ಕಾಣುತ್ತಾಳೆ.
ತಾನು
ಮಾಡಿದ ಕೃತ್ಯಕ್ಕೆ ಆತ್ಮಸಾಕ್ಷಿಪೂರಕವಾಗಿ
ಪರಿತಾಪ ಪಡುತ್ತಾಳೆ.
ಆಗ
ಆವಳು ಪಟ್ಟ ಪ್ರಾಯಶ್ಚಿತ್ತದ
ಫಲವೊ ಎಂಬಂತೆ ಆ ಎರಡೂ ಲಿಂಗಗಳಿಗೆ
ಜೀವ ಬಂದು ಅಣ್ಣ-ತಮ್ಮಂದಿರಾಗಿ
ಪ್ರತ್ಯಕ್ಷರಾಗುತ್ತಾರೆ.
ಆ
ಇಬ್ಬರು ಅಣ್ಣ-ತಮ್ಮಂದಿರೇ
ಯೋಗ-ಭೋಗ
ನಂದೀಶ್ವರರಾಗಿದ್ದಾರೆ ಎಂಬ
ನಂಬಿಕೆ ಇದೆ.
ತಮ್ಮ
ಯೋಗನಂದೀಶ್ವರನಾಗಿ ಬೆಟ್ಟದ ಮೇಲೂ
ಅಣ್ಣ ಭೋಗನಂದೀಶ್ವರನಾಗಿ ಬೆಟ್ಟದ
ಕೆಳಗೂ(ನಂದಿ
ಗ್ರಾಮದಲ್ಲಿ)
ನೆಲೆಸಿ
ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ.
ಇಂಥ
ಐತಿಹಾಸಿಕ ಮಹತ್ವದ ಸ್ಥಳ ಮಾತ್ರವೇ
ಆಗಿರದೆ ಕಲಾಪೂರ್ಣ ಈಶ್ವರನ
ಸನ್ನಿಧಿಯ ಈ ಸ್ಥಳ ಬೆಂಗಳೂರಿನಿಂದ
ಬೆಂಗಳೂರು-ಹೈದ್ರಾಬಾದ್
ರಸ್ತೆಯಲ್ಲಿ ಕೇವಲ 55
ಕಿ.ಮೀ
ದೂರವಿದೆ.
ಈ
ಪ್ರೇಕ್ಷಣೀಯ ಸ್ಥಳ ಒಂದು ದಿನದ
ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ.
***
ಐತಿಹಾಸಿಕ ಸ್ಥಳಗಳನ್ನು ಬಹಳಷ್ಟು ಜನ ನೋಡುವುದು ಒಂದೋ ಅವಸರ ಅವಸರದಲ್ಲಿ ಇಲ್ಲವೆ ತಾವೂ ಇಂಥದ್ದೊಂದನ್ನು ನೋಡಿದ್ದೇವೆ ಎಂದು ಹೇಳಿಕೊಳ್ಳುವ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳುವುದಕ್ಕೋಸ್ಕರ. ಆದರೆ ಇಂಥ ಸ್ಥಳಗಳಿಗೆ ಹೋಗುವ ಮುನ್ನ ಆಯಾ ಸ್ಥಳದ ಐತಿಹಾಸಿಕ ಹಿನ್ನಲೆ ಅಂದರೆ ಯಾವ ಕಾಲದಲ್ಲಿ ಕಟ್ಟಿಸಿದ್ದು ,ಯಾರು ಕಟ್ಟಿಸಿದ್ದು, ಯಾವ ಹಿನ್ನಲೆಯಲ್ಲಿ ಕಟ್ಟಿಸಿದ್ದು, ಅಲ್ಲಿನ ಸ್ಥಳ ಮಹಿಮೆ ಏನು? ಹಾಗು ವಿಶೇಷವಾಗಿ ಆ ಶಿಲ್ಪ ಕಲೆಯಲ್ಲಿರುವ ವಿಶೇಷತೆ ಗಳೇನು ಎಂಬುದರ ಬಗ್ಗೆ ತಿಳಿದುಕೊಂಡು ಹೋದರೆ ಅದರ ಮೇಲಿನ ಅಭಿಮಾನ ಹೆಚ್ಚುವುದಲ್ಲದೆ ನಮ್ಮ ನಾಡಿನ ಭವ್ಯ ಪರಂಪರೆಯ ಬಗ್ಗೆ ತಿಳಿದುಕೊಂಡಂತೆ ಆಗುತ್ತದೆ ಅಲ್ಲದೇ ನೋಡುವುದಕ್ಕೆ ಆಸಕ್ತಿಯೂ ಮೂಡುತ್ತದೆ. ಈಗಂತೂ ತಾಂತ್ರಿಕತೆ ಮುಂದುವರಿದಿರುವುದರಿಂದ ಮೊಬೈಲಗಳಲ್ಲಿ ಅಯಾ ಸ್ಥಳಗಳಿಗೆ ಸಂಬಂಧಿಸಿರುವ 'ಆಡಿಯೊ'ಗಳನ್ನು ಹಾಕಿಕೊಂಡು ನೋಡುತ್ತ ಹೋದರೆ ಮತ್ತಷ್ಟು ಸಂಗತಿಗಳ ಅರಿವಾಗಿ ನೋಡುವುದಕ್ಕೆ ಅಪ್ಯಾಯಮಾನವೆನ್ನಿಸುತ್ತದೆ. ಅಲ್ಲಿಲ್ಲಿ ಸಿಗುವ 'ಗೈಡ್'ಗಳು ಕೊಡುವ ಕೋಡಂಗಿ ವಿವರಣೆಗಳಿಗಿಂತ ಕರಾರುವಕ್ಕಾದ ಐತಿಹಾಸಿಕ ಸತ್ಯಗಳು ಗೊತ್ತಾಗುತ್ತವೆ. ಕೇವಲ ಕೈಬೆಳೆಣಿಕೆಷ್ಟು ಸ್ಥಳಗಳನ್ನು ಹೊರತು ಪಡಿಸಿ ಬಹಳಷ್ಟು ಕಡೆಗಳಲ್ಲಿ ಯಾವುದೆ ತರಹದ ವಿವರಣೆ ಹೇಳಲು ಯಾರೂ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಸಹಾಯವಾಗುವಂತೆ ಹಲವಾರು ಐತಿಹಾಸಿಕ ಸ್ಥಳಗಳ ವಿವರಣೆಗಳೊಗೊಂಡ ಆಡಿಯೊ ಫೈಲಗಳಿಗಾಗಿ ಇಲ್ಲಿ ಭೇಟಿ ನೀಡಿ ಡೌನ್ಲೋಡ್ ಮಾಡಿಕೊಳ್ಳಿ. ( http://bit.ly/kannadaaudiofilesall )